ಸೋಮವಾರಪೇಟೆ, ಜು.16: ಪಟ್ಟಣದ ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 16ನೇ ವರ್ಷದ ರಾಮಾಯಣ ಮಾಸದ ಆಟಿ(ಕರ್ಕಾಟಕ/ ಆಷಾಡ) ತಿಂಗಳ ದುರ್ಗಾ ದೀಪನಮಸ್ಕಾರ ಪೂಜೆಯು ತಾ.17 ರಿಂದ(ಇಂದಿನಿಂದ) ಆ. 15ರ ವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.

ತಾ. 17ರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪೂಜೆ ಆರಂಭಗೊಳ್ಳಲಿದ್ದು, ಅಂದಿನಿಂದ ಆಗಸ್ಟ್ 14ರ ಮಂಗಳವಾರದವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.30ರವರೆಗೆ ದುರ್ಗಾ ದೀಪ ನಮಸ್ಕಾರ ಪೂಜೆಗಳು ಅರ್ಚಕರುಗಳಾದ ಶ್ರೀ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಆಟಿ ಪೂಜೆಯ ಕೊನೆಯ ದಿನವಾದ ಆಗಸ್ಟ್ 15ರ ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಕಾಳೇಘಾಟ್ ವಂಶ ಪಾರಂಪರ್ಯದ ಬ್ರಹ್ಮಶ್ರೀ ನಾರಾಯಣನ್ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಸ್ವಯಂವರ ಪಾರ್ವತಿ ಹೋಮ ನಡೆಯಲಿದೆ. ದುರ್ಗಾದೀಪ ನಮಸ್ಕಾರ ಪೂಜೆ, ಮಹಾ ಸ್ವಯಂವರ ಪಾರ್ವತಿ ಹೋಮ ಸೇವಾರ್ಥಕ್ಕೆ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಸೇವಾರ್ಥ ಬಯಸುವವರು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9916785247ನ್ನು ಸಂಪರ್ಕಿಸುವಂತೆ ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಮನವಿ ಮಾಡಿದ್ದಾರೆ.