ಮಡಿಕೇರಿ, ಜು. 16: ಕೊಡಗು ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಪತ್ರಕರ್ತರ ವೇದಿಕೆ ಇವರ ಜಂಟಿ ಆಶ್ರಯದಲ್ಲಿ ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೊಡಗು ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದೆ. ನಾಡೋಜ ಡಾ. ಮಹೇಶ್ ಜ್ಯೋಶಿ, ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಹಾಗೂ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ, ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಇತರರು ಪಾಲ್ಗೊಳ್ಳಲಿದ್ದಾರೆ.

ಪ್ರೊ. ಬೆಸೂರು ಮೋಹನ್ ಪಾಲೇಗಾರ್ ಅವರ ಆಧುನಿಕ ಚಲನಶೀಲ ಜೀವ ಜಗತ್ತು ಹಾಗೂ ಎಚ್.ಎಸ್. ಚಂದ್ರಮೌಳಿ ಅವರಿಂದ ಮಾನವನ ದೇಹದ ಕ್ರಿಯೆಯೇ ವ್ಶೆಜ್ಞಾನಿಕ ಅರಿವು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.