ಮಡಿಕೇರಿ, ಜು. 19: ಅಖಿಲ ಭಾರತ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್ ವತಿಯಿಂದ ಟೋಲ್‍ಮುಕ್ತ ಭಾರತ, ಇಂಧನದರ ಕಡಿತಗೊಳಿಸಲು ಥರ್ಡ್ ಪಾರ್ಟಿ ಇನ್ಯೂರೆನ್ಸ್ ಪ್ರೀಮಿಯಂ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ತಾ. 20 ರಿಂದ (ಇಂದಿನಿಂದ) ಅನಿರ್ದಿಷ್ಟ ಕಾಲ ಲಾರಿ, ಟ್ಯಾಂಕರ್, ಪ್ರವಾಸೀ ವಾಹನ, ಮ್ಯಾಕ್ಸಿಕ್ಯಾಬ್, ಬಸ್, ಟೆಂಪೋ, ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಹೋರಾಟಕ್ಕೆ ಕೊಡಗು ಜಿಲ್ಲಾ ಪ್ರವಾಸೀ ವಾಹನ ಚಾಲಕರ, ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ, ಚಾಲಕರ ಸಂಘ, ಟೆಂಪೋ ಚಾಲಕರ ಸಂಘದವರು ಕೂಡ ಬೆಂಬಲಿಸಲಿದ್ದಾರೆಂದು ಪ್ರವಾಸೀ ವಾಹನ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಕುಳಿಯಕಂಡ ಸಂಪತ್, ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಪಿ.ಸಿ. ರಾಜು ಅವರುಗಳು ತಿಳಿಸಿದ್ದಾರೆ.