ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ ಬಳಿಕ ಕಾರಿನ ಸಂಖ್ಯೆ ಫಲಕ ಬಿಚ್ಚಿರುವ ಸುಳಿವು ಲಭಿಸಿದೆ.

ಘಟನೆ ವೇಳೆ ಯಾವದೇ ಅಪಾಯ ಎದುರಾಗಿಲ್ಲ ಎನ್ನಲಾಗುತ್ತಿದ್ದು, ದೂರು ಕೂಡ ಬಂದಿಲ್ಲವೆಂದು ಸುಂಟಿಕೊಪ್ಪ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು, ವಾಹನ ಡಿಕ್ಕಿ ಪಡಿಸಿದ್ದಲ್ಲದೆ ನಷ್ಟ ಉಂಟು ಮಾಡಿರುವವರು, ದುರಸ್ಥಿ ಪಡಿಸಿದರೆ ತಪ್ಪಿಲ್ಲವೆಂದೂ, ವಂಚಿಸಲು ಯತ್ನಿಸಿದರೆ, ಕ್ರಮ ಜರುಗಿಸಲಾಗುವದು ಎಂದು ಸುಳಿವು ನೀಡಿದ್ದಾರೆ.