ಕೂಡಿಗೆ, ಜು. 23: ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಾರ್ ಹಾಗೂ ಬೈಕ್ ಡಿಕ್ಕಿಯಾದ ಹಿನ್ನೆಲೆ ಕೂಡಿಗೆಯ ರಂಜಿತ್ (26) ಎಂಬವರಿಗೆ ತೀವ್ರ ಗಾಯವಾಗಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೈಸೂರಿನಲ್ಲಿ ಮೃತಪಟ್ಟಿರುತ್ತಾನೆ. ಮೃತ ರಂಜಿತ್, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಕೂಡಿಗೆಯ ಬೋಜೇಗೌಡ ಎಂಬವರ ಮೊದಲನೇ ಪುತ್ರನಾಗಿದ್ದು, ಪ್ರಕರಣ ಬೆಂಗಳೂರು ಸಂಚಾರಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.