ವೀರಾಜಪೇಟೆ, ಜು. 23: ಇತ್ತೀಚೆಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಆನಂದ್ ಅವರಿಗೆ ಪತ್ರಿಕೆಯಲ್ಲ್ಲಿ ಬಂದ ವರದಿಯನ್ನಾಧರಿಸಿ ನೋಟೀಸ್ ನೀಡಲಾಗಿದ್ದು ಅವರು ಈ ಕೆಳಗಿನಂತೆ ವಿವರಣೆ ನೀಡಿರುವದಾಗಿ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.

ಆಸ್ಪತ್ರೆಯ ಮಕ್ಕಳ ಚಿಕಿತ್ಸೆ ಹಾಗೂ ತಪಾಸಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಆನಂದ್ ಅವರು ತಾ:18ರಂದು ಬುಧವಾರ ರಾತ್ರಿ ಪಾಳೆಯದ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅತಿ ತಲೆನೋವು ಹಾಗೂ ವಾಂತಿಯಾಗುತ್ತಿದ್ದುದರಿಂದ ಮಾತ್ರೆ ಹಾಗೂ ಚುಚ್ಚುಮದ್ದು ತೆಗೆದುಕೊಂಡಿದ್ದರಿಂದ ಕುಳಿತ ಕುರ್ಚಿಯಲ್ಲಿಯೇ ನಿದ್ರೆ ಬಂದಂತಾಗಿದೆ ಇದರಿಂದ ಒಂದೆರಡು ರೋಗಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಸೇವೆಯಲ್ಲಿ ನಿರತರಾಗಿದ್ದಾಗ ಮದ್ಯಪಾನ ಮಾಡಿಲ್ಲ; ಈ ಆರೋಪ ನಿರಾಧಾರವಾದದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.