ಮಡಿಕೇರಿ, ಜು. 24: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ್ ಫ್ರಭು ಅವರನ್ನು ಭೇಟಿ ಮಾಡಿ, ಮೆಣಸು ಬೆಲೆ ಕುಸಿದಿರುವ ಬಗ್ಗೆ, ಕಾಫಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಹಾಗೂ ಜೇನು ಸಾಕಾಣಿಕೆಯ ಜಿಎಸ್‍ಟಿ ಹಿಂಪಡೆಯುವಿಕೆ ಬಗ್ಗೆ ವಿವರಿಸಿ ಮನವರಿಕೆ ಮಾಡಿಕೊಟ್ಟರು. ಸಚಿವರು ಸಕಾರತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಸಂಸದೆ ಶೋಭಾ ಕರಂದ್ಲಜೆ, ಬೆಳೆಗಾರರ ಸಂಘ ಹಾಗೂ ಬಿಜೆಪಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಜಯರಾಂ ಬಿದರಹಳ್ಳಿ, ಕೇಶವ್, ಕಾಫಿ ಮಂಡಳಿ ಅಧ್ಯಕ್ಷ ಬೋಜೆಗೌಡರು, ವಿಜಯ್, ಪ್ರಮೋದ್ ಇದ್ದರು.