ಮಡಿಕೇರಿ, ಜು. 23: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾನೂನು ಮಾಪನಶಾಸ್ತ್ರ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ಫೆಡೆರೇಷನ್ ರೈಸ್ ಮಿಲ್ಲು, ವೀರಾಜಪೇಟೆಯಲ್ಲಿ ತಾ. 24 ರಿಂದ 31ರವರೆಗೆ ಏರ್ಪಡಿಸಲಾಗಿದೆ. ತೂಕ, ತೂಕದ ಸಾಧನಗಳು ಮತ್ತು ಅಳತೆ ಗಳನ್ನು ನಿಗಧಿತ ದಿನಾಂಕದೊಳಗೆ ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಪ್ರಮಾಣ ಪತ್ರವನ್ನು ಹಾಜರು ಪಡಿಸಲು ಸೂಚಿಸಿದೆ.