ಮಡಿಕೇರಿ, ಜು. 24: ಗ್ರೀನ್ಸ್ ಯುವಕ ಸಂಘ ಕಟ್ಟೆಮಾಡು ವತಿಯಿಂದ ಕಟ್ಟೆಮಾಡುವಿನ ಕಟ್ಟೆಮನೆ ಪೂವಯ್ಯ ಅವರ ಗದ್ದೆಯಲ್ಲಿ ಗ್ರೀನ್ಸ್ ಯುವಕ ಸಂಘದ ಪದಾಧಿಕಾರಿಗಳು ಸಾಂಪ್ರದಾಯಿಕ ಸ್ವಸಹಾಯ (ಕೂಡುನಾಟಿ) ಪದ್ಧತಿಯಲ್ಲಿ ನಾಟಿ ಕಾರ್ಯ ಮಾಡಿದರು. ಇತ್ತೀಚಿನ ದಿನಗಳಲ್ಲಿ ಯುವಜನತೆ ನಗರ ಪ್ರದೇಶಗಳ ಕಡೆ ಹೆಚ್ಚು ಒಲವು ತೋರುತ್ತಿರುವದರಿಂದ ಸಾಂಪ್ರದಾಯಿಕ ನಾಟಿ ಪದ್ಧತಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಕ ಸಂಘದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಗ್ರೀನ್ಸ್ ಯುವಕ ಸಂಘದ ಅಧ್ಯಕ್ಷ ಕಟ್ಟೆಮನೆ ರೋಶನ್ ಹೇಳಿದ್ದಾರೆ.