*ಗೋಣಿಕೊಪ್ಪಲು, ಜು. 24: ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯದಂಚಿನಲ್ಲಿ ಜಿಂಕೆಯನ್ನು ಭೇಟಿಯಾಡಿ ಮಾಂಸವನ್ನು ಸಂಗ್ರಹಿಸಿದ್ದ ಆರೋಪದ ಮೇರೆಗೆ ಮಾಲು ಸಮೇತ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಬಾಳೆಲೆ ಸಮೀಪದ ಕುಡುಂಬೂರಿನಲ್ಲಿ ನಡೆದಿದೆ. ಆರ್ಮುಗಂ (30) ಬಂಧಿತ ಆರೋಪಿ.

ಮಂಗಳವಾರ ಬೆಳಿಗ್ಗೆ ಮತ್ತಿಗೋಡು ವನ್ಯಜೀವಿ ವಿಭಾಗದ ಡಿಆರ್‍ಎಫ್‍ಓ ಮಂಜುನಾಥ್, ಸಿಬ್ಬಂದಿಗಳಾದ ಜಯರವಿ, ಶಿವು, ಅಭಿಲಾಷ್, ರಾಚಪ್ಪ ಅರಣ್ಯದಂಚಿನಲ್ಲಿ ಗಸ್ತು ತಿರುಗುತ್ತಿ ದ್ದಾಗ ಆರ್ಮುಗಂ ಜಿಂಕೆಯನ್ನು ಭೇಟಿಯಾಡಿ ಮಾಂಸವನ್ನು ಸಂಗ್ರಹಿಸಿದ್ದ ಎನ್ನಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಘಟನೆಯನ್ನು ಭೇದಿಸುವಲ್ಲಿ ಸಫಲರಾದರು. ಆರೋಪಿಯನ್ನು ಕುಟುಂಬೂರಿನ ಮನೆಯಲ್ಲಿ ಅಂದಾಜು 20 ಕಿಲೋ ಮಾಂಸ, ಜಿಂಕೆಯ ತಲೆ ಹಾಗೂ ಕೊಂಬುಗಳ ಸಮೇತ ಸೆರೆ ಹಿಡಿದರು.

ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಚಿತ್ರ ವರದಿ : ಎನ್.ಎನ್. ದಿನೇಶ್