ಸೋಮವಾರಪೇಟೆ, ಜು23: ಇಲ್ಲಿನ ಲಯನ್ಸ್ ಸಂಸ್ಥೆಯ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ತಾ. 25ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಚೌಟ ತಿಳಿಸಿದ್ದಾರೆ.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಸ್. ಮಹೇಶ್ ವಹಿಸಲಿದ್ದಾರೆ. ಈ ಸಂದರ್ಭ ಜಿಲ್ಲಾ ರಾಜ್ಯಪಾಲ ಪಿ. ಕಿಶೋರ್‍ರಾವ್ ಹಾಗೂ ನೂತನ ಸಾಲಿನ ಅಧ್ಯಕ್ಷ ಎಸ್.ಎನ್ ಯೋಗೇಶ್ ಭಾಗವಹಿಸಲಿದ್ದಾರೆ.