ಕೂಡಿಗೆ, ಜು. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಕನಕ ಬ್ಲಾಕ್ ಕಾಮಧೇನು ಪ್ರಗತಿ ಬಂಧು ಸಂಘದ ಉದ್ಘಾಟನೆ ನೆರವೇರಿತು.

ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್ ಮಾತನಾಡಿ, ವಲಯದಲ್ಲಿ 329 ಸ್ವಸಹಾಯ ಪ್ರಗತಿ ಬಂದು ಸಂಘಗಳಿವೆ. ಸದಸ್ಯರಿಗೆ ಶಿಸ್ತು, ಉಳಿತಾಯ ಮನೋಭಾವನೆ ಒಗ್ಗಟ್ಟು ಮತ್ತು ಸಂಘದ ನಿಯಮಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಕಲ್ಪನಾ, ಸಂಘದ ಸದಸ್ಯರು ಹಾಜರಿದ್ದರು.