ಮಡಿಕೇರಿ, ಜು. 24: ಶ್ರೀ ಬೊಟ್ಲಪ್ಪ ಯುವ ಸಂಘದ ಕಡಗದಾಳುವಿನ 2018-2019ನೇ ಸಾಲಿನ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಯುವ ಸಂಘದ ಕಟ್ಟಡದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಿ.ಕೆ. ಮಂಜು, ಉಪಾಧ್ಯಕ್ಷರಾಗಿ ಬಿ.ಎಸ್. ಜನಾರ್ದನ, ಮಹಿಳಾ ಉಪಾಧ್ಯಕ್ಷೆಯಾಗಿ ಅಕ್ಕಚ್ಚಿ, ಕಾರ್ಯದರ್ಶಿಯಾಗಿ ಅವಿನಾಶ್ ಬೊಟ್ಲಪ್ಪ, ಸಹ ಕಾರ್ಯದರ್ಶಿಯಾಗಿ ಕೆ.ಎಸ್. ಯೋಗೇಶ್, ಖಜಾಂಚಿಯಾಗಿ ಕೆ.ಬಿ. ಆದಿತ್ಯ, ಸಹ ಖಜಾಂಚಿಯಾಗಿ ಸಿ.ಎಂ. ನಿಕೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಎಂ. ಶಿವಕಾಂತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ.ಟಿ. ಯೋಗೇಶ್, ಕೊಠಡಿ ಮೇಲ್ವಿಚಾರಕರಾಗಿ ಚಂದ್ರಾವತಿ ಮತ್ತು ಅಜೇಶ್ ಇವರುಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಾರ್ಷಿಕ ವರದಿಯನ್ನು ಅವಿನಾಶ್ ಬೊಟ್ಲಪ್ಪ ಮಂಡಿಸಿದರು. ನಂತರ 2017-18ರ ಲೆಕ್ಕಪತ್ರವನ್ನು ಬಿ.ಎಂ. ಶಿವಕಾಂತ್ ಮಂಡಿಸಿದರು. ವಾರ್ಷಿಕ ಸಭಾ ಹಾಜರಾತಿ ಮಂಡನೆಯನ್ನು ಬಿ.ಎಂ. ದೇವಾನಂದ ಮಂಡಿಸಿದರು. ಅಧ್ಯಕ್ಷತೆಯನ್ನು ಸಿ.ಕೆ. ಮಂಜು ವಹಿಸಿದ್ದರು.

ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಿರೂಪಿಸಿದರು. ಕೆ.ಎಸ್. ಯೋಗೇಶ್ ಸ್ವಾಗತಿಸಿ, ಸಿ.ಎಂ. ನಿಕೇಶ್ ವಂದಿಸಿದರು.