ಸುಂಟಿಕೊಪ್ಪ,ಜು.26: ಗದ್ದೆಹಳ್ಳದ ಯಂಕನ ಶೇಖರ ಎಂಬವರ ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ನಿರಂತರವಾಗಿ ಧಾಳಿ ನಡೆಸಿ ಕೃಷಿ ಫಸಲನ್ನು ತಿಂದು ದ್ವಂಸಗೊಳಿಸಿದೆ.

ಗದ್ದೆಹಳ್ಳ ಸಮೀಪದ ಗಿರಿಯಪ್ಪ ಮನೆಯಲ್ಲಿ ಕಾಡಾನೆಗಳು ಹಿಂಡು ಲಗ್ಗೆಯಿಟ್ಟು ಕೃಷಿಫಸಲನ್ನು ತಿಂದು ಧ್ವಂಸಗೊಳಿಸಿವೆ ಇದರಿಂದ ಕೃಷಿಕ ಶೇಖರ್ ಅವರಿಗೆ ಸಾವಿರಾರು ರೂ ನಷ್ಟ ಉಂಟಾಗಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ.

ಆಹಾರ ಅರಸಿ ಕಾಡಿನಿಂದ ತೋಟಕ್ಕೆ ಬಂದ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆಸಲಾದ ಕಾಫಿ, ಕರಿಮೆಣಸು, ಬಾಳೆ,ತೆಂಗು, ಸಿಲ್ವರ್ ಗಿಡಗಳನ್ನು ದ್ವಂಸಗೊಳಿಸಿದೆ. ಇದರಿಂದ ಸುಮಾರು 40 ಸಾವಿರ ಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.