ಸುಂಟಿಕೊಪ್ಪ, ಜು. 25: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಕೂಲ್‍ಬಾಣೆ ನಿವಾಸಿ ರಮೇಶ್ ಎಂಬವರ ಮನೆಗೆ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಗಾಳಿಯ ಹಿನ್ನೆಲೆ ಭಾರೀ ಗಾತ್ರದ ಮರವೊಂದು ಬಿದ್ದಿದ್ದು, ಮನೆಯ ಮೇಲ್ಚಾವಣಿಯ ಹೆಂಚು ಶೀಟುಗಳು ಹಾನಿಗೀಡಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರು ಹೆಂಚು ಹಾಗೂ ಸಿಮೆಂಟ್ ಶೀಟ್‍ಗಳನ್ನು ರಮೇಶ್ ಅವರಿಗೆ ನೀಡಿದರು.