ಸುಂಟಿಕೊಪ್ಪ, ಜು. 25: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ತಾ.27 ರಂದು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗುರು ಪೂಜಾ ಉತ್ಸವ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶುಕ್ರವಾರ ಸಂಜೆ 6.15ಕ್ಕೆ ಆಯೋಜಿಸಲಾಗಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಗಣೇಶ್ ಮಹೇಂದ್ರ ವಹಿಸಲಿದ್ದಾರೆ. ಆರ್‍ಎಸ್‍ಎಸ್ ಕೊಡಗು ಜಿಲ್ಲಾ ಪ್ರಚಾರಕ ಅವಿನಾಶ್ ಬೌದ್ಧಿಕ್ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.