ಶನಿವಾರಸಂತೆ, ಜು. 26: ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್‍ಗೆ ನುಗ್ಗಿದ 8 ಮಂದಿ ದಾಂಧಲೆ ಎಬ್ಬಿಸಿ, ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ‘ಕಲಬೆರಕೆ ಡೀಸೆಲ್ ಮಾರುತ್ತಿರುವಿರಿ’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಪೆಟ್ರೋಲ್ ಬಂಕ್ ತೇಜ್‍ಕುಮಾರ್ ಅವರದ್ದಾಗಿದ್ದು, ಕೊಡ್ಲಿಪೇಟೆಯ ಶೋಭಿತ್, ಲತೇಶ್, ಸೌಕತ್, ಜಾಬೀರ್, ಅವಿನಾಶ್, ಕುಮಾರ್, ಬಿಲಾಲ್, ಅಭಿಕಲ್ಲುಕೋರೆ ದಾಂಧಲೆ ಮಾಡಿದರು. ಕೆರೋಡಿ ಗ್ರಾಮದ ಕೆ.ಆರ್. ಸತೀಶ್ ಮತ್ತು ನೀರುಗುಂದ ಗ್ರಾಮದ ಯತೀಶ್ ಹಲ್ಲೆಗೊಳಗಾದ ಕೆಲಸಗಾರರು.

ವ್ಯವಸ್ಥಾಪಕರ ಕಚೇರಿ ಬಾಗಿಲನ್ನು ತಳ್ಳಿ ಗಾಜನ್ನು ಒಡೆದುಹಾಕಲಾಗಿದೆ. ಹಲ್ಲೆಗೊಳಗಾದ ಕೆ.ಆರ್. ಸತೀಶ್ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.