ಮಡಿಕೇರಿ, ಜು. 25: ಶ್ರೀ ರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ ಇವರ ವತಿಯಿಂದ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಚಾರಿತ್ರಿಕ ಭಾಷಣದ 125ನೇ ವರ್ಷಾಚರಣೆಯ ಪ್ರಯುಕ್ತ ತಾ. 26 ರಂದು (ಇಂದು) ಸಂಜೆ 5 ಗಂಟೆಗೆ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪ, ತಾ. 27 ರಂದು ಸಂಜೆ 5 ಗಂಟೆಗೆ ನಗರದ ವೇದಾಂತ ಸಂಘ ಹಾಗೂ ತಾ. 28 ರಂದು ಸಂಜೆ 5 ಗಂಟೆಗೆ ವೀರಾಜಪೇಟೆಯ ಕಾವೇರಿ ಆಶ್ರಮ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ಪರಮಪೂಜ್ಯ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಪ್ರವಚನ ನೀಡಲಿದ್ದಾರೆ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವ್ವರೂಪಾನಂದ ಸ್ವಾಮೀಜಿ ತಿಳಿಸಿದ್ದಾರೆ.