ಕುಸಿದ ಸೇತುವೆ - ಸಂಪರ್ಕ: ಮಡಿಕೇರಿಯ ಸುಬ್ರಹ್ಮಣ್ಯ ನಗರ ಹಾಗೂ ಮುಳಿಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದು, ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿದು ಹಲವಾರು ಸಮಯವಾದರೂ ಈ ವಾರ್ಡ್‍ನ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ಸುಳಿಯದಿರುವದು ದುರಂತ.

-ಶೈನಿ ಕುಯ್ಯಮುಡಿಕರಗಿದ ಕಾಫಿ: ನರಿಯಂದಡ, ಕೋಕೇರಿ, ಚೇಲಾವರ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಾಯಿ ಕಟ್ಟಿದ ಕಾಫಿ ಫಸಲು ಗಿಡದಲ್ಲಿಯೇ ಕೊಳೆತು ನೆಲಕಚ್ಚಿವೆ. ಬೆಳೆಗಾರನ ಪರಿಸ್ಥಿತಿ ಅಯೋಮಯವಾಗಿದೆ.

-ಡೀನಾ ಚಂಗಪ್ಪಕರೆಂಟ್‍ಗೆ ಒಳ್ಳೆಯ ಆಸರೆ: ಗೋಣಿಕೊಪ್ಪಲಿನ ಅರ್ವತೋಕ್ಲುವಿನ ಮೈಸೂರಮ್ಮ ಬಡಾವಣೆಯಲ್ಲಿರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಕಾಡು ಬಳ್ಳಿ ಸುತ್ತಿಕೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ.

-ಸಂದೀಪ್ ಪೊಲೀಸ್, ಮಡಿಕೇರಿ.ರಸ್ತೆಗೆ ಮರ- ಮಣ್ಣು: ಮಡಿಕೇರಿ- ಕಾಲೂರು ರಸ್ತೆ ಮಧ್ಯೆ ಭಾರೀ ಮಳೆಗೆ ಭೂಕುಸಿತದೊಂದಿಗೆ ಮರ ಉರುಳಿದ್ದು, ಸಂಪರ್ಕ ಕಡಿತಗೊಂಡಿತ್ತು.

-ಪ್ರವೀಣ್, ಕೋರಿಯನ