ಹೆಲ್ಮೆಟ್ ರಕ್ಷಣೆ: ಮಡಿಕೇರಿ- ಅಬ್ಬಿಫಾಲ್ಸ್ ರಸ್ತೆ ಬದಿ ಕಟ್ಟಿಕೊಂಡಿರುವ ಚರಂಡಿಯನ್ನು ಪಂಚಾಯಿತಿ ನೌಕರ ಹೆಲ್ಮೆಟ್, ರೈನ್‍ಕೋಟ್ ಧರಿಸಿಕೊಂಡು ದುರಸ್ತಿಪಡಿಸುತ್ತಿದ್ದಾರೆ.

-ಸುಕುಮಾರ್‍ವಾಹನ ಪಾರ್ಕಿಂಗ್: ಕುಶಾಲನಗರದ ಸರಕಾರಿ ಬಸ್‍ನಿಲ್ದಾಣದ ಮುಂಭಾಗದಲ್ಲಿರುವ ವಾಹನ ಪಾರ್ಕಿಂಗ್ ಅವಸ್ಥೆ.

-ಬಿ.ಎ. ಕಾರ್ಯಪ್ಪಹನಿ ನೀರೂ ಜೀವಾಮೃತ: ಮೇಲ್ಕಂಡ ಚಿತ್ರದಲ್ಲಿರುವ ಪೈಪ್ ಮೈತ್ರಿಹಾಲ್ ಮತ್ತು ಆರ್ಮಿ ಕ್ಯಾಂಟೀನ್ ನಡುವಿನ ರಸ್ತೆ ಬದಿಯಲ್ಲಿ ಇದೆ. ಇಲ್ಲಿ ಕಡಿಮೆ ಎಂದರೆ 6 ತಿಂಗಳಿನಿಂದ ನೀರು ಸೋರಿಕೆ ಆಗುತ್ತಿದೆ. ಪ್ರತಿಯೊಂದು ಹನಿ ನೀರು ನಮಗೆ ಮುಖ್ಯವೇ ಆದುದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ವಿನಂತಿ.

-ಕಿರಣ್, ವಿದ್ಯಾರ್ಥಿರಸ್ತೆ - ಸೇತುವೆ ಮುಳುಗಡೆ: ಮುಕ್ಕೋಡ್ಲುವಿನಲ್ಲಿ ಇಂದು ಸುರಿದ ಮಳೆಗೆ ರಸ್ತೆ, ಸೇತುವೆಗಳು ಸಂಪೂರ್ಣ ಮುಳುಗಡೆಗೊಂಡಿದ್ದು, ಶಾಲೆಗೆ ತೆರಳಿದ ಮಕ್ಕಳಿಗಾಗಿ ಕಾಯುತ್ತಿರುವ ಪೋಷಕರು.

-ಮಧು