ಕರಿಕೆ, ಜು. 26: ರಾಷ್ಟ್ರೀಯ ಸ್ವಯಂಸೇವಕ ಸಂಘ ಕರಿಕೆ ಶಾಖೆ ವತಿಯಿಂದ ಗುರು ಪೂಜೋತ್ಸವವನ್ನು ವಿವೇಕಾನಂದ ಯುವಕ ಸಂಘದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಜಿಲ್ಲಾ ಸಂಪರ್ಕ ಪ್ರಮುಖ ಉಡೋತ್ ಚಂದ್ರ ನಮ್ಮ ದೇಶ ಪುರಾತನ ಕಾಲದಿಂದಲೂ ನಾನಾ ಆಚಾರ ವಿಚಾರವನ್ನು ಹೊಂದಿದ್ದು, ದೇಶವನ್ನು ತಾಯಿಯ ಸ್ಥಾನದಲ್ಲಿ ಪೂಜಿಸುತ್ತೇವೆ ಎಂದರು.

ಡಾ. ಕೇಶವ ಬಲಿರಾಮ್ ಹೆಗಡೆವಾರ್ ಹುಟ್ಟು ಹಾಕಿದ ಆರ್‍ಎಸ್‍ಎಸ್ ಇಂದು ಹೆಮ್ಮರವಾಗಿ ಬೆಳೆದಿದ್ದು, ಭಗವಧ್ವಜವನ್ನು ನಾವು ಗುರುವಾಗಿ ಪೂಜಿಸುತ್ತೇವೆ, ಭಗವಧ್ವಜ ಹಿಂದೆ ರಾಮಾಯಣ-ಮಹಾಭಾರತದಲ್ಲಿ ಕೂಡ ಶ್ರೇಷ್ಠ ಸ್ಥಾನ ಪಡೆದಿತ್ತು ಆದುದ್ದರಿಂದ ನಾವೆಲ್ಲರೂ ಒಗ್ಗಟಾಗಿ ಸಂಘಟನೆಯಿಂದ ದೇಶವನ್ನು ಉನ್ನತಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಹಕಾರಿಗಳಾಗೋಣ ಎಂದರು. ಸ್ವಯಂಸೇವಕರು ಭಗವಧ್ವಜಕ್ಕೆ ಅರ್ಚನೆ ಮಾಡಿ ಸಮಾಜಕ್ಕೆ ತಮ್ಮ ಕಾಣಿಕೆ ಸಮರ್ಪಿಸಿದರು.