ಮಡಿಕೇರಿ, ಜು. 25: ವೇದಾಂತ ಸಂಘ ಕೊಡಗು, ಭಾರತೀಯ ವಿದ್ಯಾಭವನ ಮಡಿಕೇರಿ ಹಾಗೂ ಶ್ರೀ ರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮಾ ಉತ್ಸವ ಮತ್ತು ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಚಾರಿತ್ರಿಕ ಭಾಷಣ ಮಾಡಿದ 125ನೇ ವರ್ಷಾಚರಣೆಯ ಅಂಗವಾಗಿ ತಾ. 27 ರಂದು ವೇದಾಂತ ಸಂಘದಲ್ಲಿ ಸಂಜೆ4.30 ಗಂಟೆಯಿಂದ ಭಜನೆ ನಡೆಯಲಿದೆ.

5 ಗಂಟೆಯಿಂದ ಅದ್ವೈತ ಆಶ್ರಮ ಮಾಯಾವತಿ ಉತ್ತರಖಾಂಡ ಅಧ್ಯಕ್ಷರು ಮತ್ತು ಶ್ರೀ ರಾಮಕೃಷ್ಣಮಠ ಬೇಲೂರು ಇದರ ಟ್ರಸ್ಟಿಗಳೂ ಆದ ಮುಕ್ತ ನಂದಾಜಿ ಮಹರಾಜ್ ಇವರಿಂದ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ.