ಗೋಣಿಕೊಪ್ಪಲು, ಜು. 26: ಗೋಣಿಕೊಪ್ಪಲುವಿನ ವಾಹನ ಚಾಲಕ, ಮಾಲೀಕರ ಸಂಘದ ಅಧ್ಯಕ್ಷರಾಗಿ 8ನೇ ಬಾರಿಗೆ ಗೋಣಿಕೊಪ್ಪಲಿನ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಇತರ ಸಂಘ-ಸಂಸ್ಥೆಯಲ್ಲಿ ಸಕ್ರಿಯರಾಗಿರುವ ಚಿಯಕ್‍ಪೂವಂಡ ಬೋಪಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪಿ.ಎಸ್. ಶರತ್‍ಕಾಂತ್, ಕಾರ್ಯದರ್ಶಿಯಾಗಿ ಜಿ.ಆರ್. ಕೃಷ್ಣೇಗೌಡ, ಸಹ ಕಾರ್ಯದರ್ಶಿಯಾಗಿ ಕೆ.ಬಿ. ರೇಣುಕುಮಾರ್, ಖಜಾಂಚಿಯಾಗಿ ಪಿ.ಎಂ. ರಫೀಕ್ ಆಯ್ಕೆಗೊಂಡರು. ನಿರ್ದೇಶಕರಾಗಿ ಯು.ಟಿ. ವೆಂಕಟೇಶ್, ಎಂ.ಎನ್. ಸುಬ್ರಮಣಿ, ವಿ.ಟಿ. ಕೃಷ್ಣ, ಸ್ಟಾನೀ ಫರ್ನಾಂಡಿಸ್, ಕೆ.ಪಿ. ಪ್ರವೀಣ್, ಎಂ.ಎಂ. ಅಖಿಲ್, ಆಂಥೋನಿ, ಸರ್ಪುದ್ದೀನ್, ಸುಬ್ರಮಣಿ, ಅಶೋಕ, ಸೋಮಪ್ಪ, ಅನೀಶ್, ವಿನೋದ್, ಸಂತೋಷ್, ಚೇತನ್ ಕುಮಾರ್, ಸಭೀಷ್, ಮಣಿ, ಅಪ್ಪಣ್ಣ, ಯೋಗೇಶ್ ಹಾಗೂ ಸುಬ್ರಮಣಿ ಆಯ್ಕೆಗೊಂಡರು. ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸಿ.ಕೆ. ಬೋಪಣ್ಣ ಸಂಘದ ಚಟುವಟಿಕೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಸಂಕಷ್ಟದಲ್ಲಿರುವವರಿಗೆ ಸಹಕರಿಸಬೇಕು. ವಾಹನ ಚಾಲನೆ ಸಂದರ್ಭ ಎಚ್ಚರಿಕೆ ವಹಿಸುವದರೊಂದಿಗೆ ಸೂಕ್ತ ದಾಖಲಾತಿಗಳನ್ನು ಚಾಲಕರು ಇಟ್ಟುಕೊಳ್ಳಬೇಕು ಎಂದರು. ಕಾರ್ಯದರ್ಶಿ ಕೃಷ್ಣೇಗೌಡ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪಿ.ಎಂ. ರಶೀದ್ ಲೆಕ್ಕಪತ್ರ ಮಂಡಿಸಿದರು. ಸಹ ಕಾರ್ಯದರ್ಶಿ ಕೆ.ಬಿ. ರೇಣುಕುಮಾರ್ ವಂದಿಸಿದರು.