ಮಡಿಕೇರಿ, ಸೆ. 20: ಕುಂಜಿಲಗೇರಿ ವಿವಿದೋದ್ಧೇಶ ಸಹಕಾರ ದವಸ ಭಂಡಾರದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಕುಡುವಂಡ ಬಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಪ್ರಕಾರ ಕಲಾಪ ನಡೆದು, ಸದರಿ ಸಾಲಿನ ಲಾಭಾಂಶ ಹಂಚಿಕೆಯಲ್ಲಿ ಸದಸ್ಯರಿಗೆ ಶೇ. 11 ರಂತೆ ಘೋಷಿಸಲಾದ ಡಿವಿಡೆಂಡ್ ರೂ. 56,100 ಅನ್ನು ಮಹಾಸಭೆಯಲ್ಲಿನ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮೂಲಕ ಅತಿವೃಷ್ಟಿಯಿಂದ ನೊಂದ ಸಂಸ್ರತ್ತರ ನಿಧಿಗೆ ದೇಣಿಗೆಯಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದ್ದಾರೆ.