ಗೋಣಿಕೊಪ್ಪಲು, ಸೆ. 20: ಕಳತ್ಮಾಡು ಅಯ್ಯಪ್ಪ ಯುವಕ ಸಂಘದ ಆಶ್ರಯದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯ ಹಿನ್ನೆಲೆ ಸರಳ ಗಣೇಶ ವಿಸರ್ಜನೆ ಕಾರ್ಯಕ್ರಮ ನೆರವೇರಿತು. ನೂತನ ಅಧ್ಯಕ್ಷ ವಿ.ಎಂ. ಬಾಲಕೃಷ್ಣ ಅಧ್ಯಕ್ಷತೆ ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಮಹಾಪೂಜೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಸರಳ ಆಚರಣೆ ಹಿನ್ನೆಲೆ ಯಾವದೇ ಧ್ವನಿವರ್ಧಕ ಅಳವಡಿಸದೆ, ಸಂಗೀತ ರಸಮಂಜರಿ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟವನ್ನು ಈ ಬಾರಿ ರದ್ಧುಗೊಳಿಸಲಾಗಿತ್ತು. ಸಂಜೆ 6 ಗಂಟೆಗೆ ಗ್ರಾಮದ ಕೆರೆಯಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜಿಸಲಾಯಿತು. ಮಾಜಿ ಅಧ್ಯಕ್ಷ ನಂಜುಂಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.