ಮಡಿಕೇರಿ, ಸೆ. 20: ಬೆಂಗಳೂರಿನ ಜಮಾಯತುಲ್ ಅಹಲೆಹದೀಸ್ ಸಂಸ್ಥೆ ವತಿಯಿಂದ ಚಾಮುಂಡೇಶ್ವರಿನಗರ ಹಾಗೂ ಇಂದಿರಾ ನಗರ ಹಾಗೂ ತ್ಯಾಗರಾಜ ಕಾಲೋನಿಯಲ್ಲಿ 150 ನಿರಾಶ್ರಿತ ಕುಟುಂಬಗಳಿಗೆ ಧನಸಹಾಯ ಮಾಡಲಾಯಿತು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಅಸ್ಲಾಂ ಖಾನ್, ಜಂಟಿಕಾರ್ಯದರ್ಶಿ ಸಯ್ಯದ್ ಸಮಿಉಲ್ಲಾ ಬುಖಾರಿ, ಖಜಾಂಚಿ ಖಾತಿಂ ಮನ್ಸೂರ್ ಖುದೊಷಿ, ಸದಸ್ಯ ಯೂನೀಸ್ ಡಿ.ಎಲ್. ಮತ್ತಿತರರು ಇದ್ದರು.