ಮಡಿಕೇರಿ, ಸೆ. 20: ನೋಟು ಅಮಾನೀಕರಣ, ಜಿಎಸ್‍ಟಿ ಹಾಗೂ ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯದಿಂದಾಗಿ ವ್ಯಾಪಾರ ವಿಲ್ಲದೆ ಕೊಡಗಿನ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಸರಕಾರ ಕೊಡಗಿನ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸ ಬೇಕೆಂದು ಒತ್ತಾಯಿಸಿ ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ಸಂದರ್ಭ ಅಧ್ಯಕ್ಷ ಹೆಚ್.ಸಿ. ಯತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ದಿವಾಕರ್, ಉಪಾಧ್ಯಕ್ಷ ಜಿ.ಆರ್. ಸುಬ್ರಮಣ್ಯ, ಖಜಾಂಚಿ ಡಿ.ವಿ. ದಿನೇಶ್, ನಿರ್ದೇಶಕ ಮಹಮ್ಮದ್ ಉಸ್ಮಾನ್, ಸಹ ಕಾರ್ಯದರ್ಶಿ ಸಿ.ಎಸ್. ವಿಜಯಕುಮಾರ್ ಇದ್ದರು.