ಮಡಿಕೇರಿ, ಸೆ. 20: ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಇವರ ವತಿಯಿಂದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತ ಭಾಷಣ ಸ್ಪರ್ಧೆಯು ಇತ್ತೀಚೆಗೆ ಎಫ್.ಎಂ.ಕೆ.ಎಂ.ಸಿ. ಕಾಲೇಜು ಇಲ್ಲಿ ಆಯೋಜಿಸಲಾಗಿತ್ತು. ಪೊನ್ನಂಪೇಟೆ ಅರಣ್ಯ ಕಾಲೇಜಿನ ದರ್ಶನ್ ಹೆಚ್.ಎಂ ಪ್ರಥಮ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ಮಟ್ಟದ ವಿಜೇತರು: ದರ್ಶನ್ ಹೆಚ್.ಎಂ., ಅರಣ್ಯ ಕಾಲೇಜು, ಪೋನ್ನಂಪೇಟೆ, ಪ್ರಥಮ ಮೊತ್ತ ರೂ. 5 ಸಾವಿರ, ಪ್ಲೇವಿಯ ಅನುಷ ಮಾರ್ಟಿಸ್, ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ, ದ್ವೀತಿಯ ಮೊತ್ತ ರೂ. 2 ಸಾವಿರ, ಹರ್ಷಿತಾ ಎಂ.ಕೆ. ಅರಣ್ಯ ಕಾಲೇಜು, ಪೊನ್ನಂಪೇಟೆ, ತೃತೀಯ ಮೊತ್ತ ರೂ. 1 ಸಾವಿರ ಬಹುಮಾನ ಪಡೆದಿದ್ದಾರೆ.