ಸೋಮವಾರಪೇಟೆ, ಸೆ. 20: ಇಲ್ಲಿನ ಜೇಸೀರೇಟ್ ಸಂಸ್ಥೆಯ ವತಿಯಿಂದ ಸ್ಥಳೀಯ ಕ್ರಿಯೇಟಿವ್ ಅಕಾಡೆಮಿ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.

ಅಕಾಡೆಮಿಯ ಸುಮಾರು 40 ಪುಟಾಣಿ ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೇಸೀರೇಟ್ ಅಧ್ಯಕ್ಷೆ ಮಾಯಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಜೇಸೀ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ರಿಯೇಟಿವ್ ಅಕಾಡೆಮಿಯ ಮಹೇಶ್, ಜೇಸೀ ಅಧ್ಯಕ್ಷ ಪ್ರಕಾಶ್, ಜೇಸೀರೇಟ್ ಕಾರ್ಯದರ್ಶಿ ಶೈಲಾ ವಸಂತ್ ಅವರುಗಳು ಉಪಸ್ಥಿತರಿದ್ದರು.