ಕುಶಾಲನಗರ, ಸೆ. 21: ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸಹಿತ ಒಟ್ಟು 6 ಲಕ್ಷ ಮೌಲ್ಯದ ಮರವನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ವೇಳೆ ಗುಡ್ಡೆಹೊಸೂರು ಬಳಿಯ ಹೆರೂರು ಕಡೆಯಿಂದ ಬಿಲ್ವಾರ ಮರದ ನಾಟಾಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಮಿನಿ ಗೂಡ್ಸ್ ವಾಹನ (ಕೆ.12.ಬಿ.1081) ಬಸವನಹಳ್ಳಿ ಬಳಿ ತಡೆದು ಪರಿಶೀಲಿಸಿದ ಸಂದರ್ಭ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ವಾಹನ ಚಾಲಕ ಮಾದಾಪಟ್ಟಣದ ರವಿ ಎಂಬಾತನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಗೂಡ್ಸ್ ಆಟೋ ಹಾಗೂ ಅದರಲ್ಲಿದ್ದ ಬಿಲ್ವಾರ ಮರದ 5 ನಾಟಾಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಸಿ.ಎನ್.ಪೂಣಚ್ಚ, ವಿ.ಎಸ್. ಮಂಜೇಗೌಡ, ಕೆ.ಬಿ.ಚಂದ್ರ, ಎಂ.ಕೆ.ಗಣೇಶ, ಪಿ.ಬಿ.ತಿಮ್ಮಯ್ಯ, ಆರ್‍ಆರ್‍ಟಿ ಸಿಬ್ಬಂದಿಗಳಾದ ರವಿ, ಮನೋಜ್ ಪಾಲ್ಗೊಂಡಿದ್ದರು.