ವೀರಾಜಪೇಟೆ ಸೆ. 21: ವೀರಾಜಪೇಟೆಯ ತೆಲುಗರಬೀದಿಯ ನಿವಾಸಿ ಹಾಗೂ ವಕೀಲರಾಗಿರುವ ಟಿ.ಪಿ.ಕೃಷ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವ ದೂರಿನ ಮೇರೆ ಇಲ್ಲಿನ ನಗರ ಪೊಲೀಸರು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಹಾಗೂ ಅನಾಮಧೇಯ ವ್ಯಕ್ತಿ ಸೇರಿದಂತೆ ಇಬ್ಬರ ವಿರುದ್ದ ಕೊಲೆ ಬೆದರಿಕೆ ದೂರಿನ ಮೇರೆ ಐ.ಪಿ.ಸಿ 1860, 506,34,114 ರ ವಿಧಿ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ತಾ: 9.9.18ರಂದು ರಾತ್ರಿ 7.30 ಗಂಟೆಗೆ ಕಾರಿನಲ್ಲಿ ಬಂದ ಅನಾಮಧೇಯ ವ್ಯಕ್ತಿ ತೆಲುಗರ ಬೀದಿಯಲ್ಲಿರುವ ದೂರುದಾರ ಕೃಷ್ಣ ಸಂಬಂಧಿಕ ರಾಜಗೋಪಾಲ್ ಅವರ ಅಂಗಡಿಗೆ ಬಂದು ಅಂಗಡಿ ಬಳಿಯಲ್ಲಿದ್ದ ಅವರ ಮಾವನ ಮಕ್ಕಳಾದ ಶಶಿಧರ್ ಹಾಗೂ ಮಣಿಕಂಠನನ್ನು ಕರೆದು ತೆಲುಗರ ಬೀದಿಯಲ್ಲಿ ಪಟ್ಟಣ ಪಂಚಾಯಿತಿಯ ಮೂರನೇ ವಾರ್ಡ್‍ನಲ್ಲಿ ಸ್ಫರ್ಧಿಸುತ್ತಿರುವ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ವಿರುದ್ಧ ಕೃಷ್ಣ ಸ್ಫರ್ಧಿಸಿದರೆ ಕೊಲೆಗೈಯ್ಯುವದಾಗಿ ಬೆದರಿಕೆ ಹಾಕಿರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಚುನಾವಣಾ ನೀತಿ ಸಂಹಿತೆಯ ಉಲ್ಲಂಘೆನೆಯಾಗಿದೆ. ಸಚಿನ್ ಅವರ ಕುಮ್ಮಕ್ಕಿನಿಂದ ಈ ಅನಾಮಧೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ನಗರ ಪೊಲೀಸರು ತನಿಖೆ ನಡೆಸಿ ಅನಾಮಧೇಯ ವ್ಯಕ್ತಿ ಹಾಗೂ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷ್ಣ ಸ್ಫರ್ಧಿಸುತ್ತಿರುವ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ವಿರುದ್ಧ ಕೃಷ್ಣ ಸ್ಫರ್ಧಿಸಿದರೆ ಕೊಲೆಗೈಯ್ಯುವದಾಗಿ ಬೆದರಿಕೆ ಹಾಕಿರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಚುನಾವಣಾ ನೀತಿ ಸಂಹಿತೆಯ ಉಲ್ಲಂಘೆನೆಯಾಗಿದೆ. ಸಚಿನ್ ಅವರ ಕುಮ್ಮಕ್ಕಿನಿಂದ ಈ ಅನಾಮಧೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ನಗರ ಪೊಲೀಸರು ತನಿಖೆ ನಡೆಸಿ ಅನಾಮಧೇಯ ವ್ಯಕ್ತಿ ಹಾಗೂ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷ್ಣ.