*ಗೋಣಿಕೊಪ್ಪಲು, ಸೆ. 21: ಹೊರ ಜಿಲ್ಲೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋಣಿಕೊಪ್ಪಲು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅರುವತ್ತೊಕ್ಕಲು ಗ್ರಾಮದ ಖಾಲಿದ್ ಹಾಗೂ ಗೋಣಿಕೊಪ್ಪಲಿನ ಖಾದೀರ ಸೋಮಣ್ಣ ಬಂಧಿತರು.

ಖಾಲಿದ್ ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದಿಂದ 150 ಗ್ರಾಮ ತೂಕದ ಗಾಂಜಾ ತಂದು ಸೋಮಣ್ಣ ಎಂಬವರಿಗೆ ಗೋಣಿಕೊಪ್ಪಲಿನ ಕೃಷಿ ಉತ್ಮನ್ನಮಾರುಕಟ್ಟೆ ಬಳಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸುಳಿವು ಅರಿತ ಸಿಪಿಐ ದಿವಾಕರ್, ಎಸ್‍ಐ ಶ್ರೀಧರ್ ಧಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.