ಕೂಡಿಗೆ, ಸೆ. 21 : ಹಳೆ ಕೂಡಿಗೆಯ ಬಳಿ ಅಕ್ರಮವಾಗಿ 9 ಜಾನುವಾರುಗಳನ್ನು ಕೇರಳದ ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಯಡವನಾಡು ನಿವಾಸಿಗಳಾದ ಬಾಲಕೃಷ್ಣ, ಸುರೇಶ್ ಎಂಬವರ ಮೇಲೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 22-11-2016 ರಂದು 146/6 ರಂತೆ ಪ್ರಕರಣ ದಾಖಲಾಗಿತ್ತು. ಕುಶಾಲನಗರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪ ಸಾಬೀತಾದ ಹಿನ್ನೆಲೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ನಟರಾಜ್ ಆರೋಪಿಗಳಿಗೆ 6 ತಿಂಗಳ ಜೈಲು ಶಿಕ್ಷೆ, ತಲಾ 4100 ತಲಾ ದಂಡ ವಿಧಿಸಿದ್ದಾರೆ.

ಸರ್ಕಾರದ ಪರ ಸರ್ಕಾರಿ ಸಹಾಯಕ ಅಭಿಯೋಜಕ ಯಾಸಿನ್ ಅಹ್ಮದ್ ವಾದ ಮಂಡಿಸಿದರು.