ಕೂಡಿಗೆ, ಸೆ. 21: ಸುಮಾರು 3,15,000 ರೂ ಬೆಲೆ ಬಾಳುವ ತೇಗದ ನಾಟಗಳನ್ನು ತುಂಬಿಸಿಕೊಂಡು ಪಿಕ್‍ಅಪ್ ವಾಹನವೊಂದು ಕೂಡಿಗೆಯಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಕಣಿವೆಯ ಸಮೀಪ ಧಾಳಿ ಮಾಡಿ ಪಿಕ್‍ಅಪ್ ವಾಹನ(ಕೆ.ಎ.7311), ಒಂದು ಬೈಕ್(ಕೆ.ಎ.2.1112) ಮತ್ತು ತೇಗದ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗ ದರ್ಶನದಲ್ಲಿ ಬಾಣಾವರ ಉಪ ವಲಯ ಅರಣ್ಯಾದಿ üಕಾರಿ ಮಾದೇವ ನಾಯಕ್, ಚಂದ್ರೇಶ್, ಸತೀಶ್ ಕುಮಾರ್ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ವಾಹನ ವನ್ನು ಬಿಟ್ಟು ಪರಾರಿಯಾಗಿದ್ದಾರೆ.