ಕೂಡಿಗೆ, ಸೆ. 21 : ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರಂಗಿಯಲ್ಲಿ ಕತ್ತಿಯಿಂದ ಯುವಕನೋರ್ವನ ಕುತ್ತಿಗೆಗೆ ಕಡಿದ ಘಟನೆ ನಡೆದಿದೆ.

ಹಾರಂಗಿಯ ಶೇಖರ, ವಸಂತ, ಗೌತಮ್ ಎಂಬವರು ಅದೇ ಗ್ರಾಮದ ಮಧು(ಗಿರೀಶ್) ಎಂಬವರಿಗೆ ಮನೆಯ ಮುಂದೆ ಕತ್ತಿಯಿಂದ ಕಡಿದು ಮಧು ಅವರ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿದೆ. ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮಧು ಹಾರಂಗಿಯ ನರಸಿಂಹ ಅವರ ಪುತ್ರನಾಗಿದ್ದು, ಪ್ರೇಮ ಪ್ರಕರಣ ದಿಂದ ಘಟನೆ ನಡೆದಿದೆ. ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಘಟನೆಗೆ ಸಂಬಂಧಿಸಿ ದÀಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ಮಾಡಿ ವಂಸತ್, ಗೌತಮ್ ಎಂಬವರನ್ನು ಬಂದಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯೆನ್ನಲಾದ ಶೇಖರ್ ನಾಪತ್ತೆಯಾಗಿದ್ದಾನೆ. ಹುಡುಕಾಟದಲ್ಲಿ ತೊಡಗಿದ್ದಾರೆ.