ಮಡಿಕೇರಿ, ಸೆ. 21: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ವತಿಯಿಂದ ಮುಕ್ಕೋಡ್ಲು ಗ್ರಾಮದಲ್ಲಿ ಸುಮಾರು 400 ಮಂದಿ ಸಂತ್ರಸ್ತರಿಗೆ ತಲಾ ರೂ. 3,500 ಬೆಲೆಯ ಸಾಮಗ್ರಿ ಕಿಟ್ ಅನ್ನು ಇತ್ತೀಚೆಗೆ ವಿತರಿಸಲಾಯಿತು. ಸ್ವಾಮಿ ಭೋದಸ್ವರೂಪಾನಂದಜಿ ಆಶೀರ್ವಚನ ನೀಡಿದರು.

ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಮುಕ್ಕೋಡ್ಲು ಗ್ರಾ.ಪಂ. ಉಪಾಧ್ಯಕ್ಷ ಶ್ಯಾಂ ಬಿದ್ದಪ್ಪ, ಬಿ.ಜೆ.ಪಿ. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಕೊಕ್ಕಲೆರ ಸೀತಮ್ಮ, ಕೆ.ಬಿ. ನಾಣಯ್ಯ ಉಪಸ್ಥಿತರಿದ್ದರು. ಇದೇ ವೇಳೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ಡಾ. ಕೊಕ್ಕಲೆರ ಮುತ್ತಪ್ಪ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.