ಮಡಿಕೇರಿ, ಸೆ. 21: ಮಡಿಕೇರಿ ಮಹದೇವಪೇಟೆಯ ಮುಖ್ಯ ರಸ್ತೆಗೆ ಇಂಟರ್‍ಲಾಕ್ ಹಾಗೂ ಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಶಾಸಕ ಅಪ್ಪಚ್ಚು ರಂಜನ್, ಮೇಲ್ಮನೆ ಸದಸ್ಯರು ಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ, ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಮನ್ಸೂರ್, ಉದಯ್‍ಕುಮಾರ್, ಅನಿತ ಪೂವಯ್ಯ, ಲಕ್ಷ್ಮೀ, ಸವಿತಾ ರಾಕೇಶ್, ಯತೀಶ್ ಮೊದಲಾದವರು ಇದ್ದರು. ಮೂರನೇ ಹಂತದ ನಗರಸಭಾ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವದರೊಂದಿಗೆ ಒಟ್ಟು ರೂ. 1775 ಲಕ್ಷಗಳ ನಗರೋತ್ಥಾನ ನಿಧಿಯಡಿ ಕೆಲಸ ಆರಂಭಿಸಲಾಗಿದೆ.