ಮಡಿಕೇರಿ, ಸೆ. 21: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಾಗಿದೆ. ತಾ. 10 ರಂದು ಕುಂದಚೇರಿ ಗ್ರಾಮದ ಪೊನ್ನಪ್ಪ ಎಂಬವರು ಕೆಲಸಕ್ಕೆಂದು ತೆರಳಿದವರು ಹಿಂತಿರುಗಿಲ್ಲ. ಈ ಬಗ್ಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಅವರ ಪುತ್ರ ಹೆಚ್.ಪಿ. ಆನಂದ ಎಂಬವರು ದೂರು ನೀಡಿದ್ದಾರೆ. ಈ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ (ದೂ. 228330) ಇಲಾಖಾ ಪ್ರಕಟಣೆ ಕೋರಿದೆ.