ಕುಶಾಲನಗರ, ಸೆ. 21: ಸರಕಾರದ ಮೂಲಕ ಸವಿತಾ ಮಹರ್ಷಿ ಜಯಂತಿ ಆಚರಿಸುವದರೊಂದಿಗೆ ರಾಜ್ಯದಲ್ಲಿ ಸವಿತಾ ಪೀಠ ಸ್ಥಾಪನೆ ಮಾಡುವ ಕುರಿತು ಸರಕಾರಕ್ಕೆ ಒತ್ತಾಯ ಮಾಡುವದಾಗಿ ಕಲಬುರ್ಗಿಯ ಕುಂಚೂರಿನ ಸವಿತಾ ಪೀಠದ ಶ್ರೀ ಶ್ರೀ ಶ್ರೀಧರಾನಾಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಕುಶಾಲನಗರಕ್ಕೆ ಭೇಟಿ ನೀಡಿದ ಅವರು, ಸಮಾಜ ಬಾಂಧವರೊಡನೆ ಸವಿತಾ ಪೀಠ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದರು. ಈ ಸಂದರ್ಭ ಸವಿತಾ ಸಮಾಜ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ಶಿವಣ್ಣ, ಕುಶಾಲನಗರ ಅಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.