ಕೂಡಿಗೆ, ಸೆ. 21: ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಂಕಷ್ಟಕ್ಕೀಡಾಗಿರುವ ಗೋಸಂಕುಲಗಳನ್ನು ಸಂರಕ್ಷಿಸಿ, ಪೋಷಣೆ ಮಾಡುತ್ತಿರುವ ಕೂಡಿಗೆ ಜರ್ಸಿ ತಳಿ ಕೇಂದ್ರಕ್ಕೆ ಶ್ರೀ ರಾಮಚಂದ್ರಾಪುರ ಮಠ ಸಹಾಯನಿಧಿ ಹಾಗೂ ಕಾಮದುಘಾ ಟ್ರಸ್ಟ್ ಒಂದೂವರೆ ಟನ್ ಹುಲ್ಲನ್ನು ಉಚಿತವಾಗಿ ನೀಡಿದ್ದಾರೆ. ಶ್ರೀ ಮಠದವರು ಕೂಡಿಗೆಗೆ ಭೇಟಿ ನೀಡಿ ಗೋವುಗಳನ್ನು ವೀಕ್ಷಿಸಿ, ಹುಲ್ಲನ್ನು ವಿತರಿಸಿದರು.