ಮಡಿಕೇರಿ, ಅ. 25: ಅರುವತ್ತೊಕು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅರುವತ್ತೊಕ್ಲು ಗ್ರಾಮದ 4 ವಾರ್ಡ್ ಒಕ್ಕೂಟಗಳಿಂದ ಆಯ್ಕೆಯಾಗಿರುವ 12 ಮಂದಿ ಪದಾಧಿಕಾರಿಗಳನ್ನು ಸೇರಿಸಿ ಗ್ರಾಮ ಪಂಚಾಯಿತಿ ಒಕ್ಕೂಟ ಸಭೆಯನ್ನು ಆಯೋಜಿಸಲಾಗಿದೆ.

ಸಭೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ ನಾರಾಯಣ, ಪಂಚಾಯಿತಿ ಉಪಾಧ್ಯಕ್ಷೆ ರತ್ನ ಚಂದ್ರಕುಮಾರ್ ಅಧ್ಯಕ್ಷತೆಯಲ್ಲಿ ಅರುವತ್ತೊಕ್ಲು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ರಚನೆ ಮಾಡಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಸಭೆಯನ್ನು ಪಿ.ಡಿ.ಓ. ಉದ್ಘಾಟಿಸಿ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪಂಕಜಾಕ್ಷಿ ನಿರೂಪಿಸಿ, ರೇವತಿ ಪ್ರಾರ್ಥಿಸಿದರು. ನಂತರ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಒಕ್ಕೂಟದ ಅಧ್ಯಕ್ಷರಾಗಿ ರೇವತಿ, ಉಪಾಧ್ಯಕ್ಷರಾಗಿ ಶೋಭ, ಕಾರ್ಯದರ್ಶಿಯಾಗಿ ಪದ್ಮಾವತಿ, ಸಹಕಾರ್ಯದರ್ಶಿಯಾಗಿ ಪ್ರಿಯ ದಿಲೀಪ್ ಮತ್ತು ಖಜಾಂಚಿಯಾಗಿ ಮೋಸೀನ ಆಯ್ಕೆಯಾಗಿದ್ದಾರೆ.