ಮಡಿಕೇರಿ, ಅ. 25: ಆಕಾಶವಾಣಿಯಲ್ಲಿ ಕೆಲವು ವರ್ಷಗಳಿಂದ ಕೊಡವ ಭಾಷೆಯಲ್ಲೇ ಸಾವಿನ ಸುದ್ದಿಯನ್ನು ಭಿತ್ತರಿಸುತ್ತಿದ್ದು, ಕೆಲವು ದಿನಗಳಿಂದ ಕೊಡವ ಭಾಷೆಯಲ್ಲಿ ನಿಧನ ಸುದ್ದಿಯನ್ನು ಭಿತ್ತರಿಸುವದನ್ನು ನಿಲ್ಲಿಸಿ ಕನ್ನಡದಲ್ಲಿ ನಿಧನ ಸುದ್ದಿಯನ್ನು ಭಿತ್ತರಿಸಿರುವ ಬಗ್ಗೆ ಆಕ್ಷೇಶ ವ್ಯಕ್ತಪಡಿಸಿ ಕೊಡವ ಭಾಷೆಯಲ್ಲೇ ಬಿತ್ತರಿಸಬೇಕೆಂದು ಲಿಖಿತವಾಗಿ ಮಡಿಕೇರಿ ಆಕಾಶವಾಣಿಯ ನಿಲಯ ನಿರ್ದೇಶಕರಿಗೆ ಕೊಡವ ಮಕ್ಕಡ ಕೂಟ ಮನವಿ ಸಲ್ಲಿಸಿತ್ತು.

ಕೊಡವ ವiಕ್ಕಡ ಕೂಟದ ಮನವಿಗೆ ಸ್ಪಂದಿಸಿ ನಾಳೆಯಿಂದಲೇ ಕೊಡವ ಭಾಷೆಯಲ್ಲಿ ಕೊಡವರ ನಿಧನ ಸುದ್ದಿಯನ್ನು ಭಿತ್ತರಿಸುವ ಬಗ್ಗೆ ಆಕಾಶವಾಣಿಯ ಮೇಲ್ವಿಚಾರಕರು ಒಪ್ಪಿಗೆ ನೀಡಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.