*ಗೋಣಿಕೊಪ್ಪಲು, ಅ. 25: ಮೂರು ವರ್ಷ ಪ್ರಾಯದ ಜಾನುವಾರು ಮೇಲೆ ಹುಲಿ ಧಾಳಿ ನಡೆಸಿ ಕೊಂದು ಹಾಕಿರುವ ಘಟನೆ ಹಾತೂರಿನಲ್ಲಿ ಗುರುವಾರ ಜರುಗಿದೆ. ಹಸುವಿನ ಮಾಲೀಕ ಕೆ.ಡಿ. ಮಾದಯ್ಯ ಮೇಯಲು ಹಸುವನ್ನು ಗದ್ದೆಯಲ್ಲಿ ಕಟ್ಟಿ ಹಾಕಿದ್ದರು. ಬುಧವಾರ ಕಾಣೆಯಾಗಿದ್ದ ಹಸುವನ್ನು ಹುಡುಕಿದಾಗ ಗದ್ದೆ ಬದಿಯ ಪೊದೆಯಲ್ಲಿ ಹಸು ಸತ್ತು ಬಿದ್ದಿರುವದು ಗೋಚರಿಸಿದೆ. ಹಸುವಿನ ಕುತ್ತಿಗೆಯನ್ನು ಕಚ್ಚಿರುವ ಹುಲಿ ಅದರ ಹಿಂಭಾಗವನ್ನು ತಿಂದು ಹಾಕಿದೆ. ಸ್ಥಳಕ್ಕೆ ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್, ಡಿಆರ್‍ಎಫ್‍ಓ ರಾಕೇಶ್ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ಹುಲಿ ಸೆರೆಗೆ ಬೋನಿಡಲಾಗಿದೆ.

- ಎನ್.ಎನ್.ದಿನೇಶ್