ಮಡಿಕೇರಿ, ಅ. 26: ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ದಸರಾ ಉತ್ಸವದ ಕಲಾಕೃತಿಗಳಿಗೆ ಶಾಂತಿ ಪೂಜೆಯನ್ನು ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. 27ರಂದು (ಇಂದು) ಸಂಜೆ 7 ಗಂಟೆಗೆ ಏರ್ಪಡಿಸಲಾಗಿದೆ.

* ಇಲ್ಲಿನ ದೇಚೂರು ಶ್ರೀ ವಿದ್ಯಾಗಣಪತಿ (ರಾಮ ಮಂದಿರ) ದೇವಾಲಯ ದಸರಾ ಉತ್ಸವ ಮೂರ್ತಿಗಳಿಗೆ ತಾ. 28 ರಂದು (ಇಂದು) ಸಂಜೆ 6 ಗಂಟೆಗೆ ಶಾಂತಿ ಪೂಜೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

* ಇಲ್ಲಿನ ಶ್ರೀ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಉತ್ಸವದ ಮೂರ್ತಿಗಳಿಗೆ ತಾ. 27ರಂದು (ಇಂದು) ಸಂಜೆ 7 ಗಂಟೆಗೆ ಚೌಟಿ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಶಾಂತಿ ಪೂಜೆಯನ್ನು ಏರ್ಪಡಿಸಲಾಗಿದೆ.

* ಇಲ್ಲಿನ ಮಲ್ಲಿಕಾರ್ಜುನ ನಗರ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಸಂಜೆ 7 ಗಂಟೆಗೆ ದಸರಾ ಕಲಾಕೃತಿಗಳಿಗೆ ಶಾಂತಿ ಪೂಜೆ ಏರ್ಪಡಿಸಲಾಗಿದೆ.