ಕೂಡಿಗೆ, ಅ. 26: ಸೋಮವಾರಪೇಟೆ ಕಡೆಯಿಂದ ಕುಶಾಲನಗರ ದತ್ತ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂದು ಹುದುಗೂರು ಅರಣ್ಯ ಇಲಾಖೆಯ ತಂಡ ಯಡವನಾಡು ಹತ್ತಿರದ ಮುಖ್ಯ ರಸ್ತೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿ, ಲಾರಿಯಲ್ಲಿದ್ದ 5 ಬೃಹತ್ ಹೊನ್ನೆ ಮರದ ತುಂಡುಗಳು ಸೇರಿದಂತೆ ಲಾರಿಯನ್ನು ವಶಪಡಿಸಿಕೊಂಡಿರುತ್ತಾರೆ.

ಒಟ್ಟು ರೂ. 2 ಲಕ್ಷ ಮೊತ್ತದ ಹೊನ್ನೆ ಮರ ಸೇರಿದಂತೆ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕು ವಲಯ ಅರಣ್ಯ ಅಧಿಕಾರಿ ಲಕ್ಷಿಕಾಂತ್ ಅವರ ಮಾರ್ಗದರ್ಶನದಲ್ಲಿ ಹುದುಗೂರು ಉಪವಲಯ ಅರಣ್ಯ ಅಧಿಕಾರಿ ಸತೀಶ್, ಅರಣ್ಯ ರಕ್ಷಕ, ಧರ್ಮಣ್ಣ, ಸಿಬ್ಬಂದಿಗಳಾದ ಕಿರಣ, ಲೋಕೇಶ್, ಅಂತೋಣಿ ಹೆಚ್.ಎಸ್. ಲೋಕೇಶ್, ಚಾಲಕ ಚಂದ್ರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಲಾರಿ ಚಾಲಕ ರಾಜನನ್ನು ಬಂಧಿಸಲಾಗಿದೆ.