ಗೋಣಿಕೊಪ್ಪ ವರದಿ, ಅ. 27: ಮೈಸೂರು ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಶಿಟಾರಿಯೋ ಕರಾಟೆ ಡೊ ಯೂನಿಯನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಟೂರ್ನಿ ಮಬುನಿ ಕಪ್‍ನಲ್ಲಿ ಕೊಡಗಿನ ಮೂವರು ಕರಾಟೆ ಪಟುಗಳು ಪದಕ ಪಡೆದಿದ್ದಾರೆ.

60-65 ಕೆ.ಜಿ. ವಿಭಾಗದಲ್ಲಿ ಎಂ.ಐ. ಮನ್ಮಶ್ರೀ ಚಿನ್ನ, 50-55 ಕೆ.ಜಿ. ವಿಭಾಗದಲ್ಲಿ ವಿ.ಎ. ಜ್ಞಾನೇಶ್ ಬೆಳ್ಳಿ, 45-75 ಕೆ.ಜಿ. ವಿಭಾಗದಲ್ಲಿ ಜಮ್ಮಡ ಡೆರಿನ್ ದೇವಯ್ಯ ಪದಕ ಪಡೆದಿದ್ದಾರೆ.

ಇವರಿಗೆ ಕರಾಟೆಪಟು ಅರುಣ್ ಮಾಚಯ್ಯ ಅವರ ಶಿಷ್ಯಯಂದಿಯರುಗಳಾದ ಕೂಡಿಯಂಡ ಪ್ರಸಾದ್, ಜಮ್ಮಡ ಜೋಯಪ್ಪ, ಕಳ್ಳಿಕಂಡ ಕಿಶೋರ್ ತರಬೇತಿ ನೀಡಿದ್ದಾರೆ.