ಕುಶಾಲನಗರ, ಅ. 27: ಕಾವೇರಿ ನದಿ ಜಾಗೃತಿ ತೀರ್ಥಯಾತ್ರಾ ತಂಡ ಜಿಲ್ಲೆಯ ವಿವಿಧೆಡೆ ಸಾಗಿ ಶನಿವಾರ ರಾಮನಾಥಪುರ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿದೆ. ಕಾವೇರಿ ನದಿ ಸಂರಕ್ಷಣೆ ಬಗ್ಗೆ ಜಾಗೃತಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಾ. 26 ರಿಂದ ತಲಕಾವೇರಿಯಿಂದ ಚಾಲನೆಗೊಂಡ ಯಾತ್ರೆ 20 ದಿನಗಳ ಕಾಲ ಕಾವೇರಿ ನದಿ ತಟದಲ್ಲಿ ಸಂಚರಿಸಲಿದ್ದು, ನವೆಂಬರ್ 15ಕ್ಕೆ ಯಾತ್ರೆ ತಮಿಳುನಾಡಿನ ಪೂಂಪ್ ಹಾರ್‍ನಲ್ಲಿ ಸಮಾರೋಪಗೊಳ್ಳಲಿದೆ.

ಕುಶಾಲನಗರ ಮತ್ತು ಕಣಿವೆಯಲ್ಲಿ ಜೀವನದಿಗೆ ಮಹಾ ಆರತಿ ಬೆಳಗಿದ ತಂಡ ಸಂಜೆ ಜಿಲ್ಲೆಯಿಂದ ಹಾಸನದತ್ತ ಸಾಗಿತು.