ಕುಶಾಲನಗರ, ಅ. 27: ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಮುಖ್ಯಮಂತ್ರಿ ಕಪ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರ ಜ್ಞಾನಭಾರತಿ ಸ್ಪೋಟ್ರ್ಸ್ ಕ್ಲಬ್ ತಂಡ ತೃತೀಯ ಸ್ಥಾನಗಳಿಸಿ ಕಂಚಿನ ಪದಕ ಪಡೆದುಕೊಂಡಿದೆ.

ಸಿ.ಜೆ. ತವನ್ ನೇತೃತ್ವದ ತಂಡದಲ್ಲಿ ಅಜೀಜ್, ಸಚ್ಚಿನ್, ಅವಿನಾಶ್, ಉದಯವನ್, ಹೇಮಂತ್, ಸಲೀಲ್, ಅಕ್ಷಯ್ ಕುಮಾರ್, ದರ್ಶನ್, ಸಂದೀಪ್, ಪ್ರದೀಪ್ ಕುಮಾರ್, ಲಿಖಿನ್, ದೀಕ್ಷಿತ್ ಇದ್ದರು. ಹೆಚ್.ಎಸ್. ಉತ್ತಪ್ಪ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿದ್ದು, ತಂಡದ ವ್ಯವಸ್ಥಾಪಕರುಗಳಾಗಿ ಅನುದೀಪ್ ಮತ್ತು ಸಿ.ಎಸ್. ಮಧು ಇದ್ದರು.