ಮಡಿಕೇರಿ, ಅ. 27: ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಉಚಿತವಾಗಿ ನರ್ಸರಿ ಕೆಲಸಗಾರ ಮತ್ತು ಅಣಬೆ ಕೃಷಿ ಕೌಶಲ್ಯ ತರಬೇತಿ ನಡೆಯಲಿದೆ. ತರಬೇತಿ ಪಡೆಯಲು ಇಚ್ಚಿಸುವ ಶಿಬಿರಾರ್ಥಿಗಳು ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ಗುರುತಿನ ಚೀಟಿ, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ 4 ಪಾಸ್ ಪೆÇೀರ್ಟ್ ಅಳತೆಯ ಫೋಟೊ ದಾಖಲೆಗಳ ಸಮೇತ ತಾ. 31 ರಂದು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಂದರ್ಶನಕ್ಕೆ ಆಗಮಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ 08274-247274, ಮುಖ್ಯ ತರಬೇತುದಾರ ಪ್ರಭಾಕರ ಬಿ. - 7259240293, ಡಾ. ಸೋಮಶೇಖರ್ 9448349726 ಅವರನ್ನು ಸಂಪರ್ಕಿಸಬಹುದು.