ವೀರಾಜಪೇಟೆ, ಅ. 27: ವೀರಾಜಪೇಟೆ ನಗರದ ತೆಲುಗರ ಬೀದಿಯಲ್ಲಿ ನೆಲೆಸಿರುವ ತೆಲುಗು ಶೆಟ್ಟಿ ಜನಾಂಗ ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಮತ್ತು ವಿಶ್ವಾಸವಿಟ್ಟು ಪಕ್ಷದ ಬೆಳವಣಿಗೆ ಶ್ರಮಿಸಿದೆ.

ಇತ್ತಿಚೀನ ದಿನಗಳಲ್ಲಿ ಪಕ್ಷವು ಜನಾಂಗದ ಅಭ್ಯರ್ಥಿಗೆ ಪ್ರಾತಿನಿದ್ಯ ನೀಡುವಲ್ಲಿ ಎಡವಿದೆ ಆದ್ದರಿಂದ ಜನಾಂಗದ ಪ್ರಮುಖರ ನಿರ್ಣಯದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಲಾಗುತ್ತಿದೆ ಎಂದು ಜನಾಂಗದ ಹಿರಿಯ ಟಿ.ಕೆ. ಶ್ರೀನಿವಾಸ್ ಶೆಟ್ಟಿ ತಿಳಿಸಿದರು.

ನಗರ ಭಾ.ಜ.ಪ. ಕಾರ್ಯದರ್ಶಿ ಟಿ.ಜೆ. ದಿವಾಕರ್ ಶೆಟ್ಟಿ ಮುಖಾಂತರ ಅಧ್ಯಕ್ಷ ಅಂಜಪರುವಂಡ ಅನಿಲ್ ಮಂದಣ್ಣ ಅವರಿಗೆ 18 ಮಂದಿ ಸಹಿ ಮಾಡಿರುವ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಲಾಯಿತು.